ಸಹ್ಯಾದ್ರಿ ಕಾಲೇಜು ಮುಂಭಾಗದ ದೂರದರ್ಶನ ಕೇಂದ್ರದಲ್ಲಿ ಶಿವಮೊಗ್ಗ ಎಫ್ ಎಂಗೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ !
ಶಿವಮೊಗ್ಗ : ಮಲೆನಾಡಿನ ಜನತೆಯ ಬಹುದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ ಶಿವಮೊಗ್ಗದ 10 ಕೆವಿ ಎಫ್.ಎಂ ಟ್ರಾನ್ಸ್ ಮೀಟರ್ಗೆ ಇಂದು ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಶಿಲನ್ಯಾಸ ನೆರವೇರಿಸಲಿದ್ದಾರೆ.
ಶಿವಮೊಗ್ಗ 10 ಕೆವಿ ಎಫ್.ಎಂ ಟ್ರಾನ್ಸ್ ಮೀಟರ್ಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು . ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಎಫ್ಎಂ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಸಹ್ಯಾದ್ರಿ ಕಾಲೇಜು ಮುಂಭಾಗದ ದೂರದರ್ಶನ ಕೇಂದ್ರದಲ್ಲಿ ಶಿಲಾನ್ಯಾಸ ನೆರವೇರಲಿದೆ. ಚೆನ್ನೈನಿಂದ ಸಂಜೆ 6ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ 10 ಕೆವಿ ಎಫ್.ಎಂ. ಟ್ರಾನ್ಸ್ ಮೀಟರ್ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
8 ವರ್ಷಗಳ ಹಿಂದೆಯೇ ಸಂಸದ ಬಿ.ವೈ . ರಾಘವೇಂದ್ರರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದ ಪ್ರಸಾರವನ್ನು ಎಫ್ಎಂ ಮೋಡ್ನಲ್ಲಿ ಪ್ರಸಾರಿಸುವ ಉದ್ದೇಶದಿಂದ ಪ್ರಯತ್ನ ಆರಂಭಿಸಲಾಗಿತ್ತು. ಈ ಹಿಂದಿನ ವಾರ್ತಾ ಸಚಿವ ಪ್ರಕಾಶ್ ಜಾವಡೆಕರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ಆಕಾಶವಾಣಿ ಭದ್ರಾವತಿಗೆ 1 ಕಿಲೋವ್ಯಾಟ್ ಸಾಮರ್ಥ್ಯದ ಎಫ್ಎಂ ಟ್ರಾನ್ಸ್ಮೀಟರ್ ಬಂದರೂ ಕೇವಲ 20 ಕಿಲೋಮೀಟರ್ ವರೆಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು.
ಈಗ 06 ತಿಂಗಳ ಹಿಂದೆ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಈಗ 09 ಕೋಟಿ ರೂ. ಬಿಡಗಡೆಯೂ ಆಗಿದೆ. ಜನರ ನಿರೀಕ್ಷೆ ಈಡೇರುತ್ತಿದೆ ಎಂದು ಸಂಸದ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply