ಗ್ರಾಮೀಣ ಪ್ರದೇಶದ ಜನರೇ, ಈ ಅವಕಾಶವನ್ನು ಬಳಸಿಕೊಳ್ಳಿ! ನಿಮ್ಮ ಗ್ರಾಮ ಪಂಚಾಯತ್ ಸೇವೆಗಳನ್ನು ಈಗಲೇ ನಿಮ್ಮ ಮೊಬೈಲ್‌ನಿಂದಲೇ ಪಡೆದುಕೊಳ್ಳಿ!

ಗ್ರಾಮ ಪಂಚಾಯತ್ ಸೇವೆಗಳು ನಿಮ್ಮ ವಾಟ್ಸಾಪ್‌ನಲ್ಲೇ! ‘ಪಂಚಮಿತ್ರ’ ಕ್ರಾಂತಿ ಶುರು!

ಕೇಳಲು ಅಚ್ಚರಿಯಾದರೂ ನಿಜ! ಇನ್ಮುಂದೆ ಗ್ರಾಮ ಪಂಚಾಯತ್ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ಬೇಕಿಲ್ಲ. ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗಾಗಿ ಮಹತ್ವದ ಹೆಜ್ಜೆಯಿಟ್ಟಿದೆ – ‘ಪಂಚಮಿತ್ರ’ ವಾಟ್ಸಾಪ್ ಸೇವೆ! ನಿಮ್ಮ ಮನೆಯಲ್ಲೇ ಕುಳಿತು, ಕೆಲವೇ ನಿಮಿಷಗಳಲ್ಲಿ ಪಂಚಾಯತ್ ಸೇವೆಗಳನ್ನು ಪಡೆಯಬಹುದು, ದೂರುಗಳನ್ನು ಸಲ್ಲಿಸಬಹುದು. ಇದೊಂದು ನಿಜವಾದ ಕ್ರಾಂತಿ ಎಂದರೆ ತಪ್ಪಾಗಲಾರದು!

ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಏನಿದು ‘ಪಂಚಮಿತ್ರ’ ವಾಟ್ಸಾಪ್ ಸೇವೆ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರಾರಂಭಿಸಿರುವ ಈ ಅದ್ಭುತ ಉಪಕ್ರಮ, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಗ್ರಾಮೀಣ ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಇನ್ನಷ್ಟು ಹತ್ತಿರ ತಂದಿದೆ. ಇದರ ಮುಖ್ಯ ಉದ್ದೇಶ – ಸೇವಾ ವಿತರಣೆಯಲ್ಲಿ ಪಾರದರ್ಶಕತೆ, ವೇಗ ಮತ್ತು ಸುಲಭ ಪ್ರವೇಶ ಒದಗಿಸುವುದು.

ನಿಮಗೆ ಸಿಗುವ ಪ್ರಮುಖ ಸೇವೆಗಳು ಇಲ್ಲಿವೆ:

  • ಮನೆ ನಿರ್ಮಿಸುತ್ತಿದ್ದೀರಾ? ಕಟ್ಟಡ ಪರವಾನಗಿ ಸಿಗುತ್ತೆ!
  • ನೀರಿನ ಸಮಸ್ಯೆ ಇದೆಯಾ? ಹೊಸ ನೀರಿನ ಸಂಪರ್ಕ, ಅಥವಾ ನೀರಿನ ಪೈಪ್ ಲೈನ್ ದುರಸ್ತಿಗಾಗಿ ಮನವಿ ಸಲ್ಲಿಸಿ.
  • ಕತ್ತಲಲ್ಲಿ ಕಷ್ಟವಾಗ್ತಿದ್ಯಾ? ಬೀದಿ ದೀಪ ದುರಸ್ತಿಗಾಗಿ ದೂರು ಕೊಡಿ.
  • ವ್ಯಾಪಾರ ಮಾಡ್ತೀರಾ? ಲೈಸೆನ್ಸ್ ಅರ್ಜಿ ಸಲ್ಲಿಸಿ.
  • ಜಾಬ್ ಕಾರ್ಡ್ ಬೇಕಾ? ನರೇಗಾ ಜಾಬ್ ಕಾರ್ಡ್‌ಗೆ ಅರ್ಜಿ ಹಾಕಬಹುದು.
  • ಗ್ರಾಮ ಪಂಚಾಯತ್ ದಾಖಲೆಗಳು ಬೇಕೇ? ಫಾರ್ಮ್ 9, 11A, 11B ನಿಮ್ಮ ವಾಟ್ಸಾಪ್‌ಗೆ ಬರುತ್ತೆ!

ಇಷ್ಟೇ ಅಲ್ಲ! ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರಿನ ಯೋಜನೆ, ರಸ್ತೆ ಕಾಮಗಾರಿ ಪ್ರಗತಿ, ಅಂಗನವಾಡಿ ಮಾಹಿತಿ, ಆರೋಗ್ಯ ತಪಾಸಣೆ, ವಸತಿ ಯೋಜನೆಗಳು ಮತ್ತು ನಿಮ್ಮ ಗ್ರಾಮ ಪಂಚಾಯತ್‌ನ ಸಂಪೂರ್ಣ ಮಾಹಿತಿ, ಸಭೆಯ ನಿರ್ಣಯಗಳು, ಆದಾಯ-ವೆಚ್ಚ ಎಲ್ಲವೂ ಲಭ್ಯ!

ಜಾಹಿರಾತು:

ದೂರುಗಳಿಗೂ ಸಿಗುತ್ತೆ ತಕ್ಷಣ ಪರಿಹಾರ!

ನೀರು ಸರಬರಾಜು ಸಮಸ್ಯೆ, ರಸ್ತೆ ಗುಂಡಿಗಳು, ಬೀದಿ ದೀಪ ಕೆಟ್ಟು ಹೋಗಿದೆಯಾ? ಚಿಂತಿಸಬೇಡಿ! ‘ಪಂಚಮಿತ್ರ’ ಚಾಟ್‌ಬಾಟ್ ಮೂಲಕ ಬರೋಬ್ಬರಿ 39 ಬಗೆಯ ದೂರುಗಳನ್ನು ಸಲ್ಲಿಸಬಹುದು. ನಿಮ್ಮ ದೂರು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೋಗುತ್ತದೆ, ಪರಿಹಾರವೂ ಶೀಘ್ರ!

ಬಳಸುವುದು ಹೇಗೆ? ತುಂಬಾನೇ ಸುಲಭ!

1. ನಿಮ್ಮ ಮೊಬೈಲ್‌ನಲ್ಲಿ 82775 06000 ಈ ನಂಬರ್ ಸೇವ್ ಮಾಡಿಕೊಳ್ಳಿ.

2. ವಾಟ್ಸಾಪ್‌ನಲ್ಲಿ ಈ ನಂಬರ್‌ಗೆ “Hi” ಎಂದು ಮೆಸೇಜ್ ಕಳುಹಿಸಿ.

3. ನಿಮ್ಮ ಭಾಷೆ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತ್ ಆಯ್ಕೆ ಮಾಡಿ.

4. ನಿಮಗೆ ಬೇಕಾದ ಸೇವೆ ಅಥವಾ ದೂರು ಆಯ್ಕೆ ಮಾಡಿ, ಅಷ್ಟೇ!

ಭವಿಷ್ಯದಲ್ಲಿ ಇನ್ನಷ್ಟು ಸೇವೆಗಳು:

ಪಡಿತರ ಚೀಟಿ ನವೀಕರಣ, ಸ್ವಚ್ಛ ಭಾರತ ಮಿಷನ್ ಮಾಹಿತಿ, ಭೂ ದಾಖಲೆಗಳ ವಿತರಣೆಯಂತಹ ಸೇವೆಗಳು ಮುಂದಿನ ದಿನಗಳಲ್ಲಿ ‘ಪಂಚಮಿತ್ರ’ ವೇದಿಕೆಯಲ್ಲಿ ಸಿಗಲಿವೆ.

ವೀಕ್ಷಕರೇ, ಈ ಸುದ್ದಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ತಲುಪಿಸಿ. ಶೇರ್ ಮಾಡಿ!

ಇದನ್ನು ಓದಿ : ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದ 3000+ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪೂರ್ತಿ ಓದಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ

ಇಂತಹ ಹೆಚ್ಚಿನ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ಚಾನೆಲ್ ಅನ್ನು ವೀಕ್ಷಿಸುತ್ತಿರಿ.

WhatsApp Number : 7795829207


Leave a Reply

Your email address will not be published.