ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಿವರಾಜು ಪಿ ನೇಮಕ

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಿವರಾಜು ಪಿ ನೇಮಕ

ಶಿವಮೊಗ್ಗ : ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ( ಆಡಳಿತ ) ಶಿವರಾಜ್ ಪಿ ನೇಮಕವಾಗಿದ್ದಾರೆ. ಮೈಸೂರಿನಲ್ಲಿ ( ಎ ಡಿ ಸಿ ) ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿವರಾಜು ಪಿ ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರಾಗಿ ನೇಮಕಗೊಂಡಿದ್ದಾರೆ.

ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ( ಸಿ ಇ ಒ ) ಆಗಿದ್ದ ಸುಹೇಲ್ ಲೋಖಂಡೆ ಪ್ರಭಾರಿಯಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕುಲ ಸಚಿವರ ಜಾಗಕ್ಕೆ ಶಿವರಾಜು ಪಿ ನೇಮಕವಾಗಿದ್ದು. ಸಿಇಒ ಸುಹೇಲ್ ಲೋಖಂಡೆ ಅವರ ಪ್ರಭಾವಿ ನೇಮಕಾತಿ ಕೊನೆಗೊಂಡಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಇನ್ನೂ ಶಿವರಾಜು.ಪಿ ಮೈಸೂರಿನಲ್ಲಿ ( ಎಡಿಸಿ ) ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರನ್ನು ವರ್ಗಾವಣೆ ಮಾಡಿ ಅವರ ಕಾರ್ಯಸ್ಥಾನದ ಜಾಗವನ್ನ‌ ಕಾಯ್ದಿರಿಸಿ ಆದೇಶಿಸಿತ್ತು. ಆದರೆ ನೆನ್ನೆ ಕುವೆಂಪು ವಿಶ್ವವಿದ್ಯಾನಿಲಯದ ಕುಲ ಸಚಿವರನ್ನಾಗಿ ಸರ್ಕಾರ ನೇಮಕ ಮಾಡಿದೆ. ಶಿವರಾಜು ಪಿ ಎಂ ಎ ಪದವೀಧರರಾಗಿದ್ದು. ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.