ವರ್ಷದ ಮೊದಲ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ.

ವರ್ಷದ ಮೊದಲ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ.

ಸಾಗರ : ತಾಲೂಕಿನ ಅನಂದಪುರ ಹೋಬಳಿಯಲ್ಲಿ ಮೊನ್ನೆ ಸುರಿದಂತಹ ವಿಪರೀತವಾದ ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಆನಂದಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಹಾಗೂ ಹಲವು ಮನೆಗಳ ಮೇಲೆ ಮರ ಬಿದ್ದು ಮನೆ ಹಾನಿ ಉಂಟಾಗಿದೆ.

ಇದರಿಂದಾಗಿ ನೊಂದ ಕುಟುಂಬಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಅವರಿಗೆ ಸಾಂತ್ವನ ನೀಡಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ವಿಪರೀತ ಗಾಳಿ ಮಳೆಯಿಂದಾಗಿ ಈ ರೀತಿಯ ಅನಾಹುತ ಸಂಭವಿಸಿದೆ. ಇದರಿಂದ ನನ್ನ ಮನಸ್ಸಿಗೂ ತುಂಬಾ ಬೇಸರ ಉಂಟಾಗಿದೆ. ದೇವರ ದಯೆ ಚೆನ್ನಾಗಿದೆ ಯಾವುದೇ ರೀತಿಯಲ್ಲೂ ಪ್ರಾಣಕ್ಕೆ ಹಾನಿ ಉಂಟಾಗಿಲ್ಲ ಇಂದು ಶಾಸಕರು ಹೇಳಿದರು.

ನನ್ನ ಭಾಗದ ಜನರ ಕಷ್ಟ ನೋವು ಯಲ್ಲವನ್ನು ಆಲಿಸುತ್ತಾ ಧೈರ್ಯ ತುಂಬುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ವರದಿ : ಅಮಿತ್ ಆನಂದಪುರ 


Leave a Reply

Your email address will not be published.