ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿ ಹಾಗೂ ಬಿಜೆಪಿ ಶಿವಮೊಗ್ಗ ನಗರ ವತಿಯಿಂದ ತುರ್ತು ಪರಿಸ್ಥಿತಿಯ ಕುರಿತು ಜೂನ್ 26, 2025 ರಂದು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ‘ತುರ್ತು ಪರಿಸ್ಥಿತಿ’ ವಿಷಯದ ಕುರಿತು ನಡೆಯುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ನಗದು ಬಹುಮಾನ ವನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸ್ಪರ್ಧೆಯ ಪ್ರಮುಖ ವಿವರಗಳು:
ದಿನಾಂಕ: ಜೂನ್ 26, 2025 (ಗುರುವಾರ)
ಸ್ಥಳ: ಬಿಜೆಪಿ ಜಿಲ್ಲಾ ಕಚೇರಿ, ಶಿವಮೊಗ್ಗ.
ಎರಡು ವಿಭಾಗಗಳು ಮತ್ತು ವಿಷಯಗಳು:
1. ಕಾಲೇಜು ವಿದ್ಯಾರ್ಥಿಗಳ ವಿಭಾಗ (PUC ಮೇಲ್ಪಟ್ಟು):
ವಿಷಯ: 1975ರ ‘ತುರ್ತು ಪರಿಸ್ಥಿತಿ ನಾನು ತಿಳಿದಂತೆ’
ಸಮಯ: ಬೆಳಿಗ್ಗೆ 9:30 ರಿಂದ 10:30 ರವರೆಗೆ.
ಸೂಚನೆ: ವಿದ್ಯಾರ್ಥಿಗಳು ಬೆಳಿಗ್ಗೆ 9:00 ಗಂಟೆಗೆ ಕಾಲೇಜಿನ ಗುರುತಿನ ID ಕಾರ್ಡ್ನೊಂದಿಗೆ ಉಪಸ್ಥಿತರಿರಬೇಕು. ಪ್ರಬಂಧವು ಎರಡು ಪುಟಗಳಿಗಿಂತ ಮೀರಿರಬಾರದು.
2. ಸಾರ್ವಜನಿಕರ ವಿಭಾಗ:
ವಿಷಯ: “1975 ರ ತುರ್ತು ಪರಿಸ್ಥಿತಿಯ ಹೇರಿಕೆ ಮತ್ತು ಪರಿಣಾಮಗಳು”
ಸಮಯ: ಬೆಳಿಗ್ಗೆ 11:00 ರಿಂದ 12:30 ರವರೆಗೆ.
ಸೂಚನೆ: ಸಾರ್ವಜನಿಕರು ಬೆಳಿಗ್ಗೆ 11:00 ಗಂಟೆಗೆ ಉಪಸ್ಥಿತರಿರಬೇಕು. ಪ್ರಬಂಧವು ಮೂರು ಪುಟಗಳಿಗಿಂತ ಮೀರಿರಬಾರದು.
ಬಹುಮಾನಗಳು (ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿ):
ಪ್ರಥಮ ಬಹುಮಾನ: ₹5,000
ದ್ವಿತೀಯ ಬಹುಮಾನ: ₹3,000
ತೃತೀಯ ಬಹುಮಾನ: ₹2,000
ನೋಂದಣಿ ಮಾಹಿತಿ ಮತ್ತು ನಿಯಮಗಳು:
ಪ್ರಬಂಧ ಸ್ಪರ್ಧೆಗೆ ನೋಂದಾಯಿಸಲು ಜೂನ್ 25, 2025 ರ ಸಂಜೆ ಧಾರಂ ಗಂಟೆಯೊಳಗೆ ನೋಂದಾಯಿಸತಕ್ಕದ್ದು.
ನೋಂದಣಿಗಾಗಿ ಸಂಪರ್ಕಿಸಿ:
- ಸಂಚಾಲಕರು: ಎಸ್. ಜ್ಞಾನೇಶ್ವರ್ – 9449088644
- ಸಹ ಸಂಚಾಲಕರು: ಡಾ. ಶಿ. ಹ. ಜಯರಾಮ – 9449284492
- ಪ್ರಬಂಧ ಬರೆಯುವ ಹಾಳೆಯನ್ನು ಸ್ಪರ್ಧಾ ಸ್ಥಳದಲ್ಲಿ ನೀಡಲಾಗುತ್ತದೆ.
- ಭಾಗವಹಿಸುವವರು ತಮ್ಮ ಪೆನ್ನು ಮತ್ತು ಒತ್ತಿಗೆ ಕ್ಲಿಪ್ಪಾಡ್ ತರಬೇಕು.
- ಮೌಲ್ಯಮಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಫಲಿತಾಂಶ ಮತ್ತು ಬಹುಮಾನ ವಿತರಣೆ:
- ದಿನಾಂಕ: ಜೂನ್ 27, 2025 (ಶುಕ್ರವಾರ)
- ಸಮಯ: ಸಂಜೆ 5:30
- ಸ್ಥಳ: ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಿ ಬಹುಮಾನ ವಿತರಿಸಲಾಗುವುದು.
ಈ ಪ್ರಬಂಧ ಸ್ಪರ್ಧೆಯಲ್ಲಿ ಶಿವಮೊಗ್ಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಿಮ್ಮ ಆಲೋಚನೆಗಳನ್ನು ಹಂಚಿಕೊಂಡು ಬಹುಮಾನ ಗೆಲ್ಲುವಂತೆ ಬಿಜೆಪಿ ವತಿಯಿಂದ ವಿನಂತಿಸಲಾಗಿದೆ.
WhatsApp Number : 7795829207
Leave a Reply