ಸಿನಿಮಾ : ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತನ್ನ ನಟನೆ ಮೂಲಕ ನ್ಯಾಶನಲ್ ಕ್ರಶ್ ಆಗಿ ಕ್ರೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ಡ್ರೆಸ್ ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿದಂತೆ ಕಾಣ್ತಿದೆ. ನಟಿ ಜಿಮ್ ಶೂಟ್ ಬೆವರಿನಿಂದ ಒದ್ದೆ ಆಗಿದೆ. ಜಿಮ್ ನಿಂದ ಹೊರ ಬಂದ ರಶ್ಮಿಕಾ ಸಖತ್ ಸ್ಮೈಲ್ ಕೊಟ್ಟಿದ್ದಾರೆ. ನಟಿಯ ಸ್ಮೈಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶ್ರೀವಲ್ಲಿ...
Author: Jagadeesh Shipra (Jagadeesh Shipra)
ಶಿವಮೊಗ್ಗ : ಫೇಸ್ಬುಕ್ ಲವ್ ! 26 ರ ಯುವಕನ ಜೊತೆ 48ರ ಆಂಟಿಯ ಪ್ರೀತಿ ! ಲವ್ ನಂಬಿದವಳು ಕೊಲೆಯಾಗಿ ಹೋದಳು ! ಮರ್ಡರ್ ಮಿಸ್ಟ್ರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ ?
ಶಿವಮೊಗ್ಗ : ಒಂದು ಚಂದದ ಮುಖ, ಒಂದಿಷ್ಟು ಲೈಕ್ಸ್ಗಳಿಂದ ಶುರುವಾಗಿ ಇನ್ಬಾಕ್ಸ್ ನಲ್ಲಿ ಪರಿಚಯವಾಗಿ ಪರಸ್ಪರ ವಾಟ್ಸ್ಆ್ಯಪ್ ತನಕ ಹೋಗುವ ವೇಳೆಗೆ ಇಬ್ಬರ ನಡುವೆ ಒಂದು ಖಾಸಗಿ ಬಂಧ ಬೆಳೆಯುತ್ತದೆ. ನಮಗೆ ಅರಿವಿಲ್ಲದೆಯೇ ಫೇಸ್ಬುಕ್ನಲ್ಲಿ ತಮ್ಮತನದ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳಲು ಹೋಗುತ್ತೇವೆ. ಚಂದ ಚಂದದ ಫೋಟೋಗಳನ್ನು ಹರಿಬಿಡುತ್ತೇವೆ. ಅದಕ್ಕೊಂದಿಷ್ಟು ಲೈಕ್, ಕಾಮೆಂಟ್ಗಳನ್ನು ನಿರೀಕ್ಷಿಸುತ್ತೇವೆ. ಒಂದಿಷ್ಟು ಜನ ಇದಕ್ಕಂತಲೇ ಕಾದು ಕೂತಿರುತ್ತಾರೆ. ಕಾಮೆಂಟ್ಗಳಲ್ಲಿ ಒಂದಿಷ್ಟು ಮೋಡಿ ಮಾಡಿ ಬಿಡುತ್ತಾರೆ. ಚಂದದ ಹುಡುಗ ಅಥವಾ ಹುಡುಗಿಯರ ಹಿಂದೆ ಬಿದ್ದು ಬಿಡುತ್ತಾರೆ. ಮೊದಲ...
MURDER : ಆಯನೂರು ಗೇಟ್ ಬಳಿ ವ್ಯಕ್ತಿಯ ಬರ್ಬರ ಹತ್ಯೆ !
ಶಿವಮೊಗ್ಗ : ನಗರದ ಆಯನೂರು ಗೇಟ್ ಸಮೀಪ ಇರುವ ಸ್ಮಶಾನದಲ್ಲಿ ವ್ಯಕ್ತಿಯೋಬ್ಬನನ್ನ ಮಾರಕಾಸ್ತ್ರಗಳಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ. ಆಯನೂರು ಗೇಟ್ ಸಮೀಪದ ಸ್ಮಶಾನದಲ್ಲಿ ಇಬ್ಬರು ಸ್ನೇಹಿತರು ಕುಡಿಯಲು ಬಂದಿದ್ದರು, ಕುಡಿಯಲು ಕರೆದು ಕುಡಿದ ನಶೆಯಲ್ಲಿ ಗಲಾಟೆ ತೆಗೆದು ಇಬ್ಬರೂ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿಕ್ರಂ ಎನ್ನುವ ವ್ಯಕ್ತಿ ರಾಜುನಾಯ್ಕ್ ಅಲಿಯಾಸ್ ರಾಜು ಎಂಬ ಆತನನ್ನು ಮಾರಕಾಸ್ತ್ರಗಳಿಂದ ಚುಚ್ಚಿ...
ಇತಿಹಾಸ ಪುಟ ಸೇರಿದ ಮಲೆನಾಡ ರಾಜಕಾರಣದ ಸರಳ, ಸಜ್ಜನಿಕೆಯ ‘ಜಂಟಲ್ ಮ್ಯಾನ್`
ಶಿವಮೊಗ್ಗ : ಐತಿಹಾಸಿಕವಾಗಿ ಮಲೆನಾಡು ರಾಜ್ಯ ರಾಜಕೀಯದ ಪವರ್ ಸೆಂಟರ್ ಆಗಿ ಪ್ರಾಬಲ್ಯ ಸಾಧಿಸಿದೆ, ನಾಲ್ಕು ಮುಖ್ಯಮಂತ್ರಿಗಳು ಮತ್ತು ಒಬ್ಬ ಉಪಮುಖ್ಯಮಂತ್ರಿಯನ್ನು ಕೊಟ್ಟಿರುವ ಮಲೆನಾಡು ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಹೆಸರನ್ನ ಮಾಡಿದೆ. ಮಲೆನಾಡಿನ ರಾಜಕೀಯ ಹಾಗೂ ರಾಜಕಾರಣಿಗಳು ಜನರ ಮನಸ್ಥಿತಿ ಪರಿಸ್ಥಿತಿಗಳನ್ನ ಅರ್ಥೈಸಿಕೊಂಡು, ಸಾಮಾನ್ಯ ಜನರ ಸಮಸ್ಯೆಗಳಿಗೆ ಧ್ವನಿ ಯಾಗುತ್ತಾ ಹೋರಾಟದ ಹಿನ್ನೆಲೆ ಮಲೆನಾಡಿನ ರಾಜಕಾರಣ ಬೆಳೆದು ಬಂದಿದೆ ಅದಕ್ಕೆ ಭಾನು ಪ್ರಕಾಶ್ ಅವರು ಕೂಡ ಸಾಕ್ಷಿಯಾಗಿದ್ದಾರೆ, ತಮ್ಮ ಹೋರಾಟದ ಮುಖಾಂತರವೇ ರಾಜಕಾರಣಿಗಳಿಗೆ ತಮ್ಮ ತಪ್ಪನ್ನು...
BIG BREAKING NEWS : ಪ್ರತಿಭಟನೆ ವೇಳೆ ಬಿಜೆಪಿ ಮುಖಂಡ ಭಾನುಪ್ರಕಾಶ್ ಗೆ ಹೃದಯಘಾತದಿಂದ ನಿಧನ !
ಶಿವಮೊಗ್ಗ : ಬೆಲೆ ಏರಿಕೆ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ನಡೆಸ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ನಿಧನರಾಗಿದ್ದಾರೆ. ಶಿವಮೊಗ್ಗದಲ್ಲಿಂದು ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸ್ತಿತ್ತು. ವಿಭಿನ್ನ ರೀತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಷಣದ ಮಾಡಿದ ಮನೆಗೆ ಹೊರಟಿದ್ದ ಭಾನುಪ್ರಕಾಶ್ರವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುಪ್ರಕಾಶ್ ಸಾವನ್ನಪ್ಪಿದ್ದಾರೆ ಎಂಬ...
ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ ! ಕುದುರೆ ಏರಿ ಬಂದ ಡಿ ಎಸ್ ಅರುಣ್ !
ಶಿವಮೊಗ್ಗ : ಪೆಟ್ರೋಲ್, ಡೀಸೆಲ್ ಬೆಲೆ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಕೈಗೊಂಡಿದೆ. ಇಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಇಂದು ಶಿವಮೊಗ್ಗ ಬಿಜೆಪಿಯಿಂದ ನಗರದ ಐದು ಕಡೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ವಿರೋಧಿಸಿ ವಿನೂತನ ಪ್ರತಿಭಟನೆ ನಡೆಸಿದರು, ಜೈಲ್ ರಸ್ತೆಯಲ್ಲಿ ಯುವಮೋರ್ಚಾದ ಕಾರ್ಯಕರ್ತರು ಸಿಎಂ ಸುಳ್ಳ ಡಿಸಿಎಂ ಕಳ್ಳ, ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ ಎಂಬ ಘೋಷಣೆ...
ದುಬಾರಿ ಬೈಕ್ ನಲ್ಲಿ ವೃದ್ಧ ದಂಪತಿ ಯುವಕರು ನಾಚುವಂತ ಸವಾರಿ ! ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದ ನೆಟ್ಟಿಗರು !
ವಯಸ್ಸಾದ ದಂಪತಿ ಹೀರೋ ಸ್ಪ್ಲೆಂಡರ್ ಅಥವಾ ಆಕ್ಟೀವಾದಂತಹ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ದುಬಾರಿ ಮೋಟಾರ್ಸೈಕಲ್ನಲ್ಲಿ ಓಡಾಡುವುದು ಬಹಳ ಅಪರೂಪ. ಇಂತಹ ಅಪರೂಪದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜ್ಜ-ಅಜ್ಜಿ ಕೆಟಿಎಂ ಆರ್ಸಿ 390 ಮೋಟಾರ್ಸೈಕಲ್ನಲ್ಲಿ ಸವಾರಿ ಮಾಡುತ್ತಾ ತಮಿಳುನಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಫೇಸ್ಬುಕ್ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಕಾರಿನ ಮುಂದೆ ಕೆಟಿಎಂ ಆರ್ಸಿ ಮೋಟಾರ್ಸೈಕಲ್ನಲ್ಲಿ ಈ ಜೋಡಿ ಕಾಣುತ್ತಿದ್ದಂತೆ ಕಾರಿನಲ್ಲಿದ್ದ ವ್ಯಕ್ತಿ ತಮ್ಮ ಫೋನ್ ಹೊರತೆಗೆದು ದೃಶ್ಯವನ್ನು ಸೆರೆಹಿಡಿದ್ದಾರೆ....
ಡೈವೋರ್ಸ್ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ !
ಸಿನಿಮಾ : ಅರುಣ್ ಅಮುಕ್ತ ನಿರ್ದೇಶನದ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೊ ಸಾಂಗ್ ಬಿಡುಗಡೆಗೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ (Vidyarthi Vidyarthiniyare Movie) ಈ ಸಾಂಗ್ ಅನ್ನು ಅನಾವರಣಗೊಳಿಸಲಾಗಿದೆ. ನಿರ್ದೇಶಕ ಅರುಣ್ ಅಮುಕ್ತ, ಚಂದನ್ ಶೆಟ್ಟಿ, ಚೇತನ್ ಕುಮಾರ್ (Chandan Shetty) ಹಾಜರಿದ್ದ ಈ ವೇದಿಕೆಯಲ್ಲಿ ಒಟ್ಟಾರೆ ಸಿನಿಮಾ ರೂಪುಗೊಂಡಿದ್ದರ ಬಗ್ಗೆ, ಸದರಿ ಪಾರ್ಟಿ ಸಾಂಗ್ ನ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡು...
ಬಸ್ ಮತ್ತು ಲಾರಿ ನಡುವೆ ಮುಖಾ ಮುಖಿ ಡಿಕ್ಕಿ ! ಭೀಕರ ಅಪಘಾತ !
ತೀರ್ಥಹಳ್ಳಿ : ಮಂಡಗದ್ದೆ ಸಮೀಪ ಖಾಸಗಿ ಲಾರಿ ಹಾಗೂ ಕೆಎಸ್ಆರ್’ಟಿ ಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್’ಟಿಸಿ ಬಸ್ ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಖಾಸಗಿ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಎಸ್ಆರ್’ಟಿ ಸಿ ಬಸ್ಲಾಗೂ ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಾಳೂರು ಪೊಲೀಸ್ ಠಾಣಾ...
ಸಹ್ಯಾದ್ರಿ ಕಾಲೇಜ್ ಹಿಂಬಾಗ ನಾಲ್ವರು ಯುವಕರು ಅರೆಸ್ಟ್ ! ಕಾರಣ ಏನು ?
ಶಿವಮೊಗ್ಗ : ಸಹ್ಯಾದ್ರಿ ಕಾಲೇಜ್ ಹಿಂಭಾಗ ಮೊಟಾಳು ಚೌಡಮ್ಮ ದೇವಸ್ಥಾನದ ಸಮೀಪ ಮತ್ತೂರಿನ ರಸ್ತೆಯಲ್ಲಿ ನಾಲ್ಕು ಜನ ಯುವಕರು ಗಾಂಜಾ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ನೆನ್ನೆ ಭಾನುವಾರ ಮಧ್ಯಾಹ್ನದ ಸುಮಾರಿಗೆ ಶಿವಮೊಗ್ಗ ಎಸ್ ಪಿ ಜಿ ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಕಾರಿಯಪ್ಪ ಎ ಜಿ, ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆಯ ಪಿ ಐ ಸಿದ್ದೇಗೌಡ...









