‘ಒಡಲಾಳ’ದ ಸಾಕವ್ವದಿಂದ ‘ಶರ್ಮಿಷ್ಠೆ’ಯಾಗಿ ಉಮಾಶ್ರೀ ರಂಗದ ಮೇಲೆ! ಜುಲೈ 12 ರಂದು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ. ಶಿವಮೊಗ್ಗ: ಕರ್ನಾಟಕದ ರಂಗಭೂಮಿ ಕಂಡ ಶ್ರೇಷ್ಠ ಕಲಾವಿದೆ, ‘ಒಡಲಾಳ’ ನಾಟಕದ ‘ಸಾಕವ್ವ’ ಎಂದೇ ಖ್ಯಾತಿ ಪಡೆದಿರುವ ಉಮಾಶ್ರೀ ಅವರು, ಇದೇ ಮೊದಲ ಬಾರಿಗೆ ಏಕವ್ಯಕ್ತಿಯಾಗಿ ರಂಗದ ಮೇಲೆ ಅಭಿನಯಿಸುತ್ತಿರುವ “ಶರ್ಮಿಷ್ಠೆ” ನಾಟಕವು ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿದೆ. ‘ರಂಗಸಂಪದ’ ತಂಡದ ಮೂಲಕವೇ ಹವ್ಯಾಸಿ ರಂಗಭೂಮಿಯಲ್ಲಿ ಮನ್ನಣೆ ಪಡೆದಿದ್ದ ಉಮಾಶ್ರೀ, ಈಗ ಅದೇ ತಂಡದ ಸಹಯೋಗದಲ್ಲಿ ‘ಶರ್ಮಿಷ್ಠೆ’ಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದನ್ನು ಓದಿ...